ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ. ಎಲ್ಲೋ ಕೇಳಿದ ಕಥೆ,ಅನುಭವಿಸಿದ ವ್ಯಥೆ, ಇಷ್ಟಪಟ್ಟ ಯಾರದೋ ಸಾಲುಗಳು, ನೋಡಿದ ಸಿನೆಮಾಗಳ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಮನಸ್ಸಿಗೆ ತೋಚಿದ್ದನ್ನ, ನೋಡಿದ್ದನ್ನ ಬರೆಯುತ್ತೇನೆ, ನೋವನ್ನ ನಲಿವಿನಿಂದಲೇ ಹೇಳುತ್ತೇನೆ.
Sep 30, 2009
ನಾನೂ...... ನನ್ನಪ್ಪ......
ಆರೋಗ್ಯವೂ ಕೈಕೊಡುತ್ತಿದೆ...
ಅಸಹನೆ ಮೂಡುತ್ತಿದೆ...
ಹೇಳಿದ್ದನ್ನೇ ಪದೇ ಪದೇ ಹೇಳುತ್ತಾರೆ....
ಹೌದು, ಅಪ್ಪನಿಗೆ ವಯಸ್ಸಾಗುತ್ತಿದೆ.....
ಎಲ್ಲವನ್ನೂ ಸಹಿಸಿಕೊಳ್ಳಬೇಕು....
ಅವರಿಗೆ ನಾನೇ ಹೆಗಲಾಗಬೇಕು...
ನಾನೇ ಸಹನೆ ಬೆಳೆಸಿಕೊಳ್ಳಬೇಕು....
ಅವರಿಗೆ ನಾನೇ ಕಿವಿಯಾಗಬೇಕು.....
ಯಾಕೆಂದರೆ, ನಾನೂ ಅಪ್ಪನಾಗುತ್ತೇನೆ..
ನಾಳೆ, ನನಗೂ ವಯಸ್ಸಾಗುತ್ತದೆ......
Sep 26, 2009
ಮಂಗಳೂರು ದಸರಾ...೨
ಭಗವಂತನ ಶಕ್ತಿ ರೂಪದ ಆರಾಧನೆಯ ಮೂರು ಶಕ್ತಿಗಳಾದ ಮಧುಕೈಟಭನನ್ನು ಕೊಂದ ಮಹಾಕಾಳಿ, ಮಹಿಷಾಸುರನನ್ನು ಕೊಂದ ಮಹಿಷಮರ್ಧಿನಿ ಮಹಾಲಕ್ಷ್ಮಿ , ಶುಂಭ ನಿಶುಮ್ಬರನ್ನು ಕೊಂದ ಸರಸ್ವತಿ ಶಕ್ತಿಯನ್ನು ವಿಶೇಷವಾಗಿ ಆಚರಿಸುತ್ತಾ, ದೇವಿಯ ಒಂಬತ್ತು ರೂಪಗಳನ್ನು ಒಂಬತ್ತು ದಿನಗಳಲ್ಲಿ ಆರಾಧಿಸಲಾಗುತ್ತದೆ......
ತಮೊಗುಣಗಳನ್ನು ಮಹಾಕಾಳಿ, ರಜೋಗುಣವನ್ನು ಮಹಾಲಕ್ಷ್ಮಿ, ಸತ್ವಗುಣವನ್ನು ಮಹಾಸರಸ್ವತಿ ಪ್ರತಿನಿಧಿಸುತ್ತಿದ್ದಾರೆ..........
ಮದ್ಯಮ ಮೂರೂ ದಿನಗಳಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾ, ನಮ್ಮ ಸದ್ಗುಣ ಸಂಪತ್ತನ್ನು ಅವಳ ಅನುಗ್ರಹದಿಂದ ಹೆಚ್ಚಿಸಿಕೊಳ್ಳಬೇಕು.....
ಈ ಮೂರ್ತಿಗಳನ್ನು ಇಟ್ಟ ಹಾಲ್ ಯಾವ ಸಿನೆಮ್ಮಾದ ಸೆಟ್ಟನ್ನು ನಾಚಿಸುವಂತಿದೆ, ನಿಜವಾಗಿಯು ಅದ್ಭುತ....
ಇಲ್ಲಿಯ ಮುಖ್ಯ ಆಕರ್ಷಣೆ, ೨೫-೩೦ ಮೀಟರ್ ಮೇಲೆ ಚಿಮ್ಮುವ ಕಾರಂಜಿ, ಇದನ್ನ ಶಿವನ ಜಡೆಯಿಂದ ಚಿಮ್ಮುವ ಹಾಗೆ ಮಾಡಿದ್ದಾರೆ... ಕೊಳದ ನಾಲ್ಕೂ ಮೂಲೆಗಳಲ್ಲಿ ನಾಲ್ಕು ಶಿವನ ಮೂರ್ತಿಯನ್ನ ನಿಲ್ಲಿಸಿ ಅದರ ತಲೆಯಿಂದ ಆಕಾಶಕ್ಕೆ ಚಿಮ್ಮುವ ಕಾರಂಜಿಯನ್ನ ನೋಡೇ ಆನಂದಿಸಬೇಕು.......
ಕೊನೆಯದಾಗಿ ತಾಳ್ಮೆಯ, ಬ್ರಹ್ಮಚರ್ಯದ ಪ್ರತಿರೂಪದಂತಿರುವ ಆಂಜನೇಯನ ಮೂರ್ತಿ ಗಮನ ಸೆಳೆಯುತ್ತದೆ......
ಭಾಯೇಭ್ಯಾ ಸ್ರಾಹಿನೋ ದೇವಿ ದುರ್ಗೇ ದೇವಿ ನಮೋಸ್ತುತೆ !!
ಏನೇ ನಿನ್ನೆಸರು..........?
Sep 23, 2009
ಮಂಗಳೂರು ದಸರಾ.......
ನವದೇವಿಯರನ್ನು ಪ್ರತಿಷ್ಟಾಪಿಸಿದ ಹಾಲ್ .........
ಮೊದಲಿಗೆ ಗಣರಾಜನಿಗೆ ವಂದಿಸಿರಿ.........
ದೇವಿಯ ಮುಖದಲ್ಲಿನ ಸಿಟ್ಟು, ಪ್ರಶಾಂತತೆಯನ್ನು ನೋಡಿರಿ......
ಈ ದೇವಸ್ಥಾನದಲ್ಲಿ ಇತ್ತೀಚಿಗಸ್ಥೆ ದಸರಾ ಆಚರಿಸಲು ಶುರು ಮಾಡಿದ್ದಾರೆ.... ಆದರೆ, ಇದು ಮುಂದುವರೆದ ರೀತಿ ನೋಡಿದರೆ ತುಂಬಾ ಆಶ್ಚರ್ಯವಾಗುತ್ತದೆ....
ಮಂಗಳೂರಿನ ಜನ ತುಂಬಾ ವ್ರತ್ತಿಪರರು, ಅವರಿಗೆ ಮನರಂಜನೆ ಬೇಕು, ಲಾಭ ಬೇಕು, ಸುಮ್ಮನೆ ಕಾಲಹರಣ ಮಾಡುವವರಲ್ಲ....ಆದ್ರೆ ದೇವರಿಗೆ ತುಂಬಾ ಹೆದರುತ್ತಾರೆ..... ದೇವರನ್ನು ತುಂಬಾ ನಂಬುತ್ತಾರೆ....
ಇನ್ನೂ ಚಿತ್ರಗಳಿವೆ......ಅದನ್ನ ನಾಳೆಗಾಗಿ ಉಳಿಸಿಕೊಂಡಿದ್ದೇನೆ......ಕಾಯುತ್ತಿರಿ ತಾನೇ.....
Sep 21, 2009
ಹೀಗೊಂದು ಲವ್ ಸ್ತೋರಿಗಳ ಎಂಡ್.........
ಹುಡುಗಿ ಅಂದಳು...... ಐ ಆಮ್ ಸಾರೀ ......
( ಅಲ್ಲಿಗೆ......ಹುಡುಗ ಸುಖವಾಗಿದ್ದ...........)
೨. ಹುಡುಗ ಅಂದ .. ಐ ಲವ್ ಯು......
ಹುಡುಗಿ ಅಂದಳು.........ಓಕೆ , ಮದುವೆಯಾಗೋಣ.......
( ಇನ್ನೇನು ಸ್ಟೋರಿ ಇರತ್ತೆ, ಅವನ ಹಣೆಬರಹ ಬಿಡಿ )
೩. ಹುಡುಗ ಹುಡುಗಿ ತುಂಬಾ ಪ್ರೀತಿಸಿ ಯಾರಿಗೂ ಹೇಳದೆ ಕೇಳದೆ ಬೈಕಿನಲ್ಲಿ ಊರು ಬಿಟ್ಟು
ಹೊರಡುತ್ತಾರೆ.....ಕಾಡ ರಸ್ತೆ.......ದೂರ ದೂರದವರೆಗೂ ಬೆಳಕಿಲ್ಲಾ......ಕದ್ದು ತಂದ ಬೈಕ್ ಸಹ ' ಡುರ್...
...ಡುರ್ ' ಎನ್ನುತ್ತಾ ನಿಂತು ಬಿಡತ್ತೆ....ಇಬ್ಬರು ಗಾಬರಿಯಾಗುತ್ತಾರೆ....ಹುಡುಗನಿಗೆ ಪೆಟ್ರೋಲ್
ಖಾಲಿಯಾಗಿರಬೇಕು ಅನಿಸತ್ತೆ......ಆ ಕಡೆ , ಈ ಕಡೆ ನೋಡುತ್ತಾನೆ..... ಏನೂ ಸಿಗಲ್ಲ.... ಜೇಬಿನಲ್ಲಿ
ಸಿಗರೇಟು ಸೇದಲು ತಂದಿದ್ದ ಲೈಟರ್ ನೆನಪಾಗುತ್ತದೆ..... .. ಪೆಟ್ರೋಲ್ ಟ್ಯಾಂಕ್ ಓಪನ್ ಮಾಡಿ
ಲೈಟರ್ ಹತ್ತಿಸಿ ಪೆಟ್ರೋಲ್ ಖಾಲಿಯಾಗಿದೆಯಾ ಅಂತ ನೋಡುತ್ತಾನೆ..............................
..........................................................................................................................
..................................................
( ಮುಂದೆನಿರತ್ತೆ ಸ್ಟೋರಿ.....ಬರಿ ಬೂದಿ ಸಿಗಬಹುದು ಅಷ್ಟೆ ............)
---ಎಲ್ಲಿಂದಲೋ ಕದ್ದ ಕಥೆಗೆ ಉಪ್ಪು ಖಾರ ಹಚ್ಚಿ ಹೇಳಿದ್ದೇನೆ
Sep 16, 2009
'ಕಾಂಜೀವರಂ' ಕಥೆ.......!
ಇವತ್ತು ನಾನು ಕೇಳಿದ ಒಂದು ಸಿನಿಮಾದ ಬಗ್ಗೆ ಬರೆಯುತ್ತಿದ್ದೇನೆ.. ಸಿನಿಮಾದ ಹೆಸರು 'ಕಾಂಜೀವರಂ' . ಇದರಲ್ಲಿ ಮಾಡಿದ ಅಪ್ಪನ ಪಾತ್ರಕ್ಕೆ ನಮ್ಮವರೇ ಆದ ಪ್ರಕಾಶ್ ರೈ ಅವರಿಗೆ ಬೆಸ್ಟ್ ನಟ ರಾಷ್ಟ್ರ ಪ್ರಶಸ್ತಿ ಸಿಕ್ಕದೆ... ಆ ಚಿತ್ರದ ಕಥೆ ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರತ್ತೆ.... ಕಥೆ ಹೀಗಿದೆ..... ಕೇಳಿ...... .
ಈ ಚಿತ್ರ ಅಪ್ಪ ಮತ್ತು ಮಗಳ ನಡುವಿನ ಪ್ರೀತಿಯ ಬಗ್ಗೆ ಇದೆ... ಅಪ್ಪ ಕಾಂಜೀವರಂ ರೇಷ್ಮೆ ಸೀರೆಗಳನ್ನು ನೇಯುವ ಬಡ ನೇಕಾರ. ಅವನಿಗೆ ಸ್ವಂತ ಮಗ್ಗವಿಲ್ಲ... ಅಲ್ಲಿ ನೇಕಾರರನ್ನು ದಿನಗೂಲಿಯ ಮೇಲಿಟ್ಟು ಸೀರೆ ನೆಯಿಸಿಕೊಳ್ಳುವ, ಬಹಳ ಕಠಿಣವಾದ ಜಮೀನ್ದಾರಿ ಪದ್ಧತಿ ಇದೆ. ಮಗಳು ದೊಡ್ಡವಳಾದಾಗ ಅವಳ ಮದುವೆಗೆ ಏನೇನು ಕೊಡುತ್ತೇನೋ ಅದನ್ನ ಎಲ್ಲರ ಎದುರಿಗೂ ಹೋಳೋದು ಅಲ್ಲಿನ ರಿವಾಜು.... ಒಂದು ಅರ್ಥದಲ್ಲಿ ಅದು ಆಣೆ ಮಾಡಿದಂತೆ. ಬಡ ಅಪ್ಪನಿಗೆ ಮಗಳ ಮೇಲೆ ತುಂಬಾ ತುಂಬಾ ಪ್ರೀತಿ. ದೊಡ್ಡವಳಾದ ಮಗಳನ್ನು ಕೂಡಿಸಿ ಆರತಿ ಮಾಡುವಾಗ ಈ ಬಡ ಅಪ್ಪ ಎಲ್ಲರ ಎದುರಿಗೆ ' ಮಗಳೇ, ನಿನ್ನ ಮದುವೆಯಲಿ ನಿನಗೆ ಕಾಂಜೀವರಂ ಸೀರೆ ಉಡಿಸಿ ಕಳಿಸುತ್ತೇನೆ' ಎಂದು ಬಿಡುತ್ತಾನೆ... ಇವನ ನೆಂಟರಿಷ್ಟರು ಇವನನ್ನು ತುಂಬ ಬೈಯುತ್ತಾರೆ, ಇಷ್ಟು ಬಡತನದಲ್ಲಿ ರೇಷ್ಮೆ ಸೀರೆ ಕೊಡಿಸುವುದು ಸಾದ್ಯದ ಮಾತಾ ಎಂದು ಇವನನ್ನು ಕೇಳುತ್ತಾರೆ.... ಬಡ ಅಪ್ಪ, ಮಗಳ ಮೇಲಿನ ಪ್ರೀತಿಯಿಂದ ಅದನ್ನ ಮಾಡಿ ತೋರಿಸುವ ಹಠ ತೊಡುತ್ತಾನೆ.... ಅವನಿಗೂ ಗೊತ್ತಿರುತ್ತೆ, ಜೀವಮಾನವಿಡಿ ದುಡಿದರೂ ತನ್ನಿಂದ ಮಗಳಿಗೆ ಕಾಂಜೀವರಂ ರೇಷ್ಮೆ ಸೀರೆ ಕೊಡಿಸೋಕ್ಕೆ ಆಗಲ್ಲ ಅಂತ.....ಆದರೂ ಅವನು ಹಣ ಕೂದಿಡೋಕೆ ಶುರು ಮಾಡುತ್ತಾನೆ. ಅದು ಸಾಕಾಗದೆ ಇದ್ದಾಗ ಕಳ್ಳತನ ಮಾಡಲು ಯೋಚಿಸುತ್ತಾನೆ..... ರಹಸ್ಯವಾಗಿ ಒಬ್ಬ ಕಾರ್ಪೆಂಟರ್ ಹಿಡಿದು ಒಂದು ಕೈಮಗ್ಗ ಮಾಡಿಸಿ ಅದನ್ನ ಯಾರಿಗೂ ತೋರಿಸದೇ ಇರುತ್ತಾನೆ....... ಜಮೀನ್ದಾರನಲ್ಲಿ ಪ್ರತಿದಿನ ಕೆಲಸ ಮಾಡಿ ಬರುವಾಗ ಸ್ವಲ್ಪ ರೇಷ್ಮೆಯನ್ನು ಕದ್ದು ಬಾಯಿಯಲ್ಲಿ ಇಟ್ಟುಕೊಂಡು ಬರುತ್ತಾನೆ...ಆ ಕದ್ದು ತಂದ ನೂಲಿನಿಂದ ಮಗಳಿಗಾಗಿ ಸೀರೆ ನೇಯಲು ಶುರು ಮಾಡುತ್ತಾನೆ... ಊರಲ್ಲಿ ಶುರುವಾದ ಕಾರ್ಮಿಕ ಸಂಘದ ನಾಯಕ ಇವನೇ ಆಗಿ ಧಣಿಗಳ ವಿರುದ್ದ ಹೋರಾಟಕ್ಕೆ ಇಳಿಯುತ್ತಾನೆ... ಈ ಮದ್ಯೆ ಯಾರದೋ ಕೊಲೆ ನಡೆದು ಇವನು ಜೈಲಿಗೆ ಹೋಗುತ್ತಾನೆ... ಅರ್ಧ ನೇಯ್ದ ಸೀರೆ ಹಾಗೆ ಉಳಿಯುತ್ತದೆ... ಮುಂದೆ ಮಗಳು ಕಾಯಿಲೆಗೆ ಬೀಳುತ್ತಾಳೆ, ಅಪ್ಪನಿಗೆ ಜೀವಾವದಿ ಶಿಕ್ಷೆ. ಕೊನೆಗೆ ಅಪ್ಪ ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಗೆ ಬರುವ ಹೊತ್ತಿಗೆ ಮಗಳು ಸತ್ತು ಹೋಗುತ್ತಾಳೆ....ಆದರೆ ಮನೆಯ ಒಳಗೆ ರಹಸ್ಯವಾಗೆ ನೇಯ್ದು ಇಟ್ಟಿದ್ದ ಅರ್ಧ ರೇಷ್ಮೆ ಸೀರೆ ಹಾಗೆ ಇರುತ್ತದೆ.....ಅದನ್ನು ತಂದು ಮಗಳ ಶವದ ಮೇಲೆ ಹೊದೆಸಲು ಪ್ರಯತ್ನ ಮಾಡುತ್ತಾನೆ....ಮುಖ ಮುಚ್ಕಾಲಿಕ್ಕೆ ಹೋದರೆ ಕಾಲಿಗೆ ಸಾಕಾಗ್ತಾ ಇರಲಿಲ್ಲ ....ಕಾಲು ಮುಚ್ಕಾಲಿಕ್ಕೆ ಹೋದರೆ ಶವದ ಮುಖ ತೆರೆದುಕೊಳ್ಳುತ್ತಿತ್ತು....ಮಗಳಿಗೆ ಕಾಂಜೀವರಂ ಸೀರೆ ಉಡಿಸಿ ಕಲಿಸುವ ಅಪ್ಪನ ಕನಸು ಹಾಗೆ ಉಳಿದು ಹೋಗುತ್ತದೆ...
ಅಪ್ಪನ ಪಾತ್ರದಲ್ಲಿ ನಮ್ಮ ಪ್ರಕಾಶ್ ರೈ ಇದ್ದಾರೆ.... ಪ್ರಿಯದರ್ಶನ್ ನಿರ್ದೇಶನ ಇದೆ..... ಇಷ್ಟು ಒಳ್ಳೆ ಕಥೆ ಇರುವ ಸಿನೆಮಾಗಳು ನಮ್ಮ ಊರಲ್ಲಿ ಬರೋದೇ ಇಲ್ಲ... ಬಂದರೂ ನೋಡೋರು ಇರಲ್ಲ.... ನಿಮಗೇನಾದರೂ ನೋಡುವ ಅವಕಾಶ ಸಿಕ್ಕರೆ, ನನಗೆ ದಯವಿಟ್ಟು ತಿಳಿಸಿ...... ಇದೆ ಸಿನೆಮಾದ ಮಾಡಿದ ಪಾತ್ರಕ್ಕಾಗಿ ಪ್ರಕಾಶ್ ರೈ ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.... ಅಭಿನಂದನೆಗಳು ಪ್ರಕಾಶ್.....
Sep 15, 2009
Sep 12, 2009
ಧಿಕ್ಕಾರ.......ಧಿಕ್ಕಾರ.....
Sep 10, 2009
ಇನ್ನೊಮ್ಮೆ ಬಾ......!
Sep 9, 2009
ಕೇಳಿದ ಮಾತುಗಳು
ನಾನೆಷ್ಟು ಒಬ್ಬಂಟಿ ಎಂದುಕೊಳ್ಳುತ್ತೇನೋ,
ಜಗತ್ತು ನನ್ನನ್ನು ಅಷ್ಟೇ ಒಬ್ಬಂಟಿಯಾಗಿ ಮಾಡುತ್ತದೆ.
ನನಗೆ ಎಷ್ಟು ಗೌರವ ಸಿಗಬೇಕೋ,
ಅದನ್ನು ಪಡೆಯಲು ನಾನು ಯಾರನ್ನೂ ಬೇಡಬೇಕಾಗಿಲ್ಲ.
ದೇಹಕ್ಕೆ ಆದ ಗಾಯಕ್ಕಿಂತಲೂ,
ಹೃದಯಕ್ಕಾದ ಗಾಯ ತುಂಬಾ ನೋಯಿಸುತ್ತದೆ.
ನಾನು ಎಷ್ಟು ಹೆಚ್ಚು ಹೆಚ್ಚು ನಗುತ್ತೇನೋ,
ನನ್ನ ನೋವು ಅಷ್ಟು ಆಳ ಇದೆ.
ನಾನು ಎಷ್ಟೇ ಪ್ರಾರ್ಥಿಸಿದರು ಸಹ,
ನನಗೆ ಏನು ಸಿಗಬೇಕೋ ಅದೇ ಸಿಗುತ್ತದೆ.
ನಮ್ಮ ಎಲ್ಲಾ ಸುಳ್ಳು ಸಂಬಂಧಗಳಿಗೂ,
ಕೊನೆ ಇದೆ ಮತ್ತೆ ಅದು ಹಳಸುತ್ತದೆ ಕೂಡ.
ಕೆಲವೊಮ್ಮೆ ನಮ್ಮ ಕಣ್ಣೀರು,
ಮಾತಿಗಿಂತಲೂ ಹರಿತವಾಗಿರುತ್ತದೆ.
- ಎಲ್ಲೋ ಕೇಳಿದ್ದರ ಭಾವಾನುವಾದ.
Sep 7, 2009
ಹೃದಯ....
ಹೃದಯವೆಂಬ ಜಾಗದಲ್ಲಿ.......!
ಯೋಚನೆಗಳು ಬದಲಾಗಿ,
ಆಸೆಗಳಾಗುತ್ತವೆ.....
ಆಸೆಗಳು ಬದಲಾಗಿ,
ಕನಸುಗಳಾಗುತ್ತವೆ....
ನಮ್ಮನ್ನು ನಾವು,
ನಂಬಿದರೆ ಮಾತ್ರ ಎಲ್ಲವು,
ನನಸಾಗುತ್ತವೆ......
Sep 6, 2009
ಈಗ ಅವಳಿಲ್ಲ.....
ಈಗ ಅವಳಿಲ್ಲ,
ಅವಳ ಮಾತಿಲ್ಲ,
ಮಾತಲ್ಲಿ ಮೋಹವಿಲ್ಲ,
ಮೋಹದ ಮೋಸವಿಲ್ಲ,
ಮೋಸದ ಮನಸಿಲ್ಲ,
ಮನಸಲ್ಲಿ ನಾನಿಲ್ಲ,
ನನ್ನಲ್ಲಿ ನೋವಿಲ್ಲ,
ನೋವಿಗೆ ಅವಳೇ ಇಲ್ಲ......!