Sep 30, 2009

ನಾನೂ...... ನನ್ನಪ್ಪ......

ಅಸಹಾಯಕತೆ ಇದೆ...
ಆರೋಗ್ಯವೂ ಕೈಕೊಡುತ್ತಿದೆ...
ಅಸಹನೆ ಮೂಡುತ್ತಿದೆ...
ಹೇಳಿದ್ದನ್ನೇ ಪದೇ ಪದೇ ಹೇಳುತ್ತಾರೆ....

ಹೌದು, ಅಪ್ಪನಿಗೆ ವಯಸ್ಸಾಗುತ್ತಿದೆ.....

ಎಲ್ಲವನ್ನೂ ಸಹಿಸಿಕೊಳ್ಳಬೇಕು....
ಅವರಿಗೆ ನಾನೇ ಹೆಗಲಾಗಬೇಕು...
ನಾನೇ ಸಹನೆ ಬೆಳೆಸಿಕೊಳ್ಳಬೇಕು....
ಅವರಿಗೆ ನಾನೇ ಕಿವಿಯಾಗಬೇಕು.....

ಯಾಕೆಂದರೆ, ನಾನೂ ಅಪ್ಪನಾಗುತ್ತೇನೆ..
ನಾಳೆ, ನನಗೂ ವಯಸ್ಸಾಗುತ್ತದೆ......

Sep 26, 2009

ಮಂಗಳೂರು ದಸರಾ...೨













ಭಗವಂತನ ಶಕ್ತಿ ರೂಪದ ಆರಾಧನೆಯ ಪರ್ವಕಾಲವೇ ನವರಾತ್ರಿ. ಒಂಬತ್ತು ದಿನಗಳ ಕಾಲ ನಮ್ಮ ದೇಹ , ಮನಸ್ಸು ಮತ್ತು ಆತ್ಮಗಳಿಗೆ ವಿಶ್ರಾಂತಿ ಕೊಟ್ಟು ಹೊಸ ಉಲ್ಲಾಸ , ಚೈತನ್ಯದೊಂದಿಗೆ ಹೊರಬರುವುದೇ ಆಚರಣೆಯ ಉದ್ದೇಶ ಆಗಿದೆ.....









ಭಗವಂತನ ಶಕ್ತಿ ರೂಪದ ಆರಾಧನೆಯ ಮೂರು ಶಕ್ತಿಗಳಾದ ಮಧುಕೈಟಭನನ್ನು ಕೊಂದ ಮಹಾಕಾಳಿ, ಮಹಿಷಾಸುರನನ್ನು ಕೊಂದ ಮಹಿಷಮರ್ಧಿನಿ ಮಹಾಲಕ್ಷ್ಮಿ , ಶುಂಭ ನಿಶುಮ್ಬರನ್ನು ಕೊಂದ ಸರಸ್ವತಿ ಶಕ್ತಿಯನ್ನು ವಿಶೇಷವಾಗಿ ಆಚರಿಸುತ್ತಾ, ದೇವಿಯ ಒಂಬತ್ತು ರೂಪಗಳನ್ನು ಒಂಬತ್ತು ದಿನಗಳಲ್ಲಿ ಆರಾಧಿಸಲಾಗುತ್ತದೆ......


ಶಾರದಮುರ್ತಿಯ ಮುಗ್ಧ ಮುಖ , ಪ್ರಶಾಂತತೆಯನ್ನ ನೋಡಿ, ಭಕ್ತಿ ಉಕ್ಕಿ ಬರದೆ ಇರಲು ಸಾದ್ಯವೇ ಇಲ್ಲ.......












ತಮೊಗುಣಗಳನ್ನು ಮಹಾಕಾಳಿ, ರಜೋಗುಣವನ್ನು ಮಹಾಲಕ್ಷ್ಮಿ, ಸತ್ವಗುಣವನ್ನು ಮಹಾಸರಸ್ವತಿ ಪ್ರತಿನಿಧಿಸುತ್ತಿದ್ದಾರೆ..........












ಮೊದಲ ೩ ದಿನ ಮಹಾಕಾಳಿಯ ಪೂಜೆ ಮಾಡುತ್ತಾ ನಮ್ಮ ದುರ್ಗುಣಗಳನ್ನು ಹೋಗಲಾದಿಸಿಕೊಳ್ಳಬೇಕು......












ಮದ್ಯಮ ಮೂರೂ ದಿನಗಳಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾ, ನಮ್ಮ ಸದ್ಗುಣ ಸಂಪತ್ತನ್ನು ಅವಳ ಅನುಗ್ರಹದಿಂದ ಹೆಚ್ಚಿಸಿಕೊಳ್ಳಬೇಕು.....











ಕೊನೆಯ ಮೂರು ದಿನಗಳಲ್ಲಿ, ಜ್ನಾನದೇವತೆಯಾದ ಸರಸ್ವತಿಯನ್ನು ಆರಾಧಿಸುತ್ತಾ ನಮ್ಮಲ್ಲಿರುವ ಎಲ್ಲಾ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಆ ಜಾಗದಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿ ಜ್ಞಾನವನ್ನು ಗಳಿಸಿ ಬಾಳಬೇಕೆಂಬುದು ನವರಾತ್ರಿ ಆಚರಣೆಯ ಮುಖ್ಯ ಉದ್ದೇಶವಾಗಿದೆ........











ಈ ಎಲ್ಲ ಮೂರ್ತಿಗಳನ್ನು ದಸರಾದ ಸಮಯದಲ್ಲಿ ಪ್ರತಿಷ್ಟಾಪಿಸುತ್ತಾರೆ.....












ಈ ಮೂರ್ತಿಗಳನ್ನು ಇಟ್ಟ ಹಾಲ್ ಯಾವ ಸಿನೆಮ್ಮಾದ ಸೆಟ್ಟನ್ನು ನಾಚಿಸುವಂತಿದೆ, ನಿಜವಾಗಿಯು ಅದ್ಭುತ....










ಇಲ್ಲಿಯ ಮುಖ್ಯ ಆಕರ್ಷಣೆ, ೨೫-೩೦ ಮೀಟರ್ ಮೇಲೆ ಚಿಮ್ಮುವ ಕಾರಂಜಿ, ಇದನ್ನ ಶಿವನ ಜಡೆಯಿಂದ ಚಿಮ್ಮುವ ಹಾಗೆ ಮಾಡಿದ್ದಾರೆ... ಕೊಳದ ನಾಲ್ಕೂ ಮೂಲೆಗಳಲ್ಲಿ ನಾಲ್ಕು ಶಿವನ ಮೂರ್ತಿಯನ್ನ ನಿಲ್ಲಿಸಿ ಅದರ ತಲೆಯಿಂದ ಆಕಾಶಕ್ಕೆ ಚಿಮ್ಮುವ ಕಾರಂಜಿಯನ್ನ ನೋಡೇ ಆನಂದಿಸಬೇಕು.......

















ಕೊನೆಯದಾಗಿ ತಾಳ್ಮೆಯ, ಬ್ರಹ್ಮಚರ್ಯದ ಪ್ರತಿರೂಪದಂತಿರುವ ಆಂಜನೇಯನ ಮೂರ್ತಿ ಗಮನ ಸೆಳೆಯುತ್ತದೆ......
!! ಸರ್ವ ಸ್ವರೂಪೆ ಸರ್ವೆಷೆ ಸರ್ವಶಕ್ತಿ ಸಮನ್ವಿತೆ
ಭಾಯೇಭ್ಯಾ ಸ್ರಾಹಿನೋ ದೇವಿ ದುರ್ಗೇ ದೇವಿ ನಮೋಸ್ತುತೆ !!

ಏನೇ ನಿನ್ನೆಸರು..........?


ನೆರಳಾಗಿ ಹಿಂದೆ ಬಿದ್ದಿದ್ದು......
ಉಸಿರಾಗಿ ಇರುತ್ತೇನೆ ಎಂದಿದ್ದು...
ಕೊನೆಯರೆಗೂ ಬಾಳುತ್ತೇನೆ ಅಂದಿದ್ದು...
ಬಣ್ಣ ಬಣ್ಣದ ಕನಸು ತೋರಿಸಿದ್ದು.......

ಬರಿಯ ಮೋಸಾನ ........?


ಕನಸಲ್ಲಿ ಬಂದು ಕಾಡಿದ್ದು....
ತುಸು ಪ್ರೀತಿಗಾಗಿ ಬೇಡಿದ್ದು.....
ನೋವಿನಲ್ಲೂ ಜೊತೆ ಕೇಳಿದ್ದು.....
ನಲಿವಿನಲ್ಲೂ ಪಾಲು ನೀಡಿದ್ದು....

ಬರಿಯ ಮೋಸಾನ........?


ಆತ್ಮೀಯತೆಯ ಸೋಗು ಹಾಕಿದ್ದು.....
ಸ್ನೇಹಕ್ಕೆ ಪ್ರೀತಿಯ ಹೆಸರು ನೀಡಿದ್ದು.....
ಪ್ರೀತಿಗೆ ಕೆಟ್ಟ ಅರ್ಥ ಕೊಟ್ಟಿದ್ದು.......
ವಿರಸಕ್ಕೆ ಹೊಸ ಕಾರಣ ಹುಡುಕಿದ್ದು.....

ಬರಿಯ ಮೋಸಾನ......?


ನಿನ್ನ ಹೆಸರೇ ಮೋಸಾನ......?


Sep 23, 2009

ಮಂಗಳೂರು ದಸರಾ.......

ಹಾಯ್ ಫ್ರೆಂಡ್ಸ್.

ನಾನು ಮಂಗಳೂರಿನವನಾಗಿ ಇಲ್ಲಿ ನಡೆಯುವ ದಸರಾಕ್ಕೆ ನಿಮ್ಮನ್ನೆಲ್ಲಾ ಕರೆಯಲು ಆಗದೆ ಇದ್ದರು , ನಿಮಗೆ ಇಲ್ಲಿಯ ಜ್ಹಲಕ್ ತೋರಿಸದೇ ಇದ್ದರೆ ಹ್ಯಾಗೆ ಅಲ್ಲವೇ.......
ಇಲ್ಲಿಯ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುವ ದಸರಾದ ಕೆಲವು ಫೋಟೋಗಳನ್ನು ನಿಮಗಾಗಿ ಇರಿಸಿದ್ದೀನೆ.... ಮುಂದಿನ ದಸರಾಕ್ಕೆ ನಿಮಗೆಲ್ಲ ಆಹ್ವಾನ ನೀಡುತ್ತೇನೆ....... ಈ ಸಲಕ್ಕೆ ಇದರಲ್ಲೇ ತ್ರಪ್ತಿಪಡಿಸುತ್ತಿದ್ದೇನೆ.....
ಇದು ದೇವಸ್ಥಾನ ಒಳಹೊಕ್ಕಂತೆಯೇ ಕಾಣುವ ದ್ರಶ್ಯ....


ನವದೇವಿಯರನ್ನು ಪ್ರತಿಷ್ಟಾಪಿಸಿದ ಹಾಲ್ .........




ಮೊದಲಿಗೆ ಗಣರಾಜನಿಗೆ ವಂದಿಸಿರಿ.........













ದೇವಿಯ ಮುಖದಲ್ಲಿನ ಸಿಟ್ಟು, ಪ್ರಶಾಂತತೆಯನ್ನು ನೋಡಿರಿ......




















ಈ ದೇವಸ್ಥಾನದಲ್ಲಿ ಇತ್ತೀಚಿಗಸ್ಥೆ ದಸರಾ ಆಚರಿಸಲು ಶುರು ಮಾಡಿದ್ದಾರೆ.... ಆದರೆ, ಇದು ಮುಂದುವರೆದ ರೀತಿ ನೋಡಿದರೆ ತುಂಬಾ ಆಶ್ಚರ್ಯವಾಗುತ್ತದೆ....


















ಮಂಗಳೂರಿನ ಜನ ತುಂಬಾ ವ್ರತ್ತಿಪರರು, ಅವರಿಗೆ ಮನರಂಜನೆ ಬೇಕು, ಲಾಭ ಬೇಕು, ಸುಮ್ಮನೆ ಕಾಲಹರಣ ಮಾಡುವವರಲ್ಲ....ಆದ್ರೆ ದೇವರಿಗೆ ತುಂಬಾ ಹೆದರುತ್ತಾರೆ..... ದೇವರನ್ನು ತುಂಬಾ ನಂಬುತ್ತಾರೆ....





















ಇನ್ನೂ ಚಿತ್ರಗಳಿವೆ......ಅದನ್ನ ನಾಳೆಗಾಗಿ ಉಳಿಸಿಕೊಂಡಿದ್ದೇನೆ......ಕಾಯುತ್ತಿರಿ ತಾನೇ.....

Sep 21, 2009

ಹೀಗೊಂದು ಲವ್ ಸ್ತೋರಿಗಳ ಎಂಡ್.........

೧. ಹುಡುಗ ಎಂದ..... ಐ ಲವ್ ಯು......
ಹುಡುಗಿ ಅಂದಳು...... ಐ ಆಮ್ ಸಾರೀ ......
( ಅಲ್ಲಿಗೆ......ಹುಡುಗ ಸುಖವಾಗಿದ್ದ...........)


೨. ಹುಡುಗ ಅಂದ .. ಐ ಲವ್ ಯು......
ಹುಡುಗಿ ಅಂದಳು.........ಓಕೆ , ಮದುವೆಯಾಗೋಣ.......
( ಇನ್ನೇನು ಸ್ಟೋರಿ ಇರತ್ತೆ, ಅವನ ಹಣೆಬರಹ ಬಿಡಿ )


೩. ಹುಡುಗ ಹುಡುಗಿ ತುಂಬಾ ಪ್ರೀತಿಸಿ ಯಾರಿಗೂ ಹೇಳದೆ ಕೇಳದೆ ಬೈಕಿನಲ್ಲಿ ಊರು ಬಿಟ್ಟು
ಹೊರಡುತ್ತಾರೆ.....ಕಾಡ ರಸ್ತೆ.......ದೂರ ದೂರದವರೆಗೂ ಬೆಳಕಿಲ್ಲಾ......ಕದ್ದು ತಂದ ಬೈಕ್ ಸಹ ' ಡುರ್...
...ಡುರ್ ' ಎನ್ನುತ್ತಾ ನಿಂತು ಬಿಡತ್ತೆ....ಇಬ್ಬರು ಗಾಬರಿಯಾಗುತ್ತಾರೆ....ಹುಡುಗನಿಗೆ ಪೆಟ್ರೋಲ್
ಖಾಲಿಯಾಗಿರಬೇಕು ಅನಿಸತ್ತೆ......ಆ ಕಡೆ , ಈ ಕಡೆ ನೋಡುತ್ತಾನೆ..... ಏನೂ ಸಿಗಲ್ಲ.... ಜೇಬಿನಲ್ಲಿ
ಸಿಗರೇಟು ಸೇದಲು ತಂದಿದ್ದ ಲೈಟರ್ ನೆನಪಾಗುತ್ತದೆ..... .. ಪೆಟ್ರೋಲ್ ಟ್ಯಾಂಕ್ ಓಪನ್ ಮಾಡಿ
ಲೈಟರ್ ಹತ್ತಿಸಿ ಪೆಟ್ರೋಲ್ ಖಾಲಿಯಾಗಿದೆಯಾ ಅಂತ ನೋಡುತ್ತಾನೆ..............................
..........................................................................................................................

..................................................
( ಮುಂದೆನಿರತ್ತೆ ಸ್ಟೋರಿ.....ಬರಿ ಬೂದಿ ಸಿಗಬಹುದು ಅಷ್ಟೆ ............)

---ಎಲ್ಲಿಂದಲೋ ಕದ್ದ ಕಥೆಗೆ ಉಪ್ಪು ಖಾರ ಹಚ್ಚಿ ಹೇಳಿದ್ದೇನೆ

Sep 16, 2009

'ಕಾಂಜೀವರಂ' ಕಥೆ.......!

ಇವತ್ತು ನಾನು ಕೇಳಿದ ಒಂದು ಸಿನಿಮಾದ ಬಗ್ಗೆ ಬರೆಯುತ್ತಿದ್ದೇನೆ.. ಸಿನಿಮಾದ ಹೆಸರು 'ಕಾಂಜೀವರಂ' . ಇದರಲ್ಲಿ ಮಾಡಿದ ಅಪ್ಪನ ಪಾತ್ರಕ್ಕೆ ನಮ್ಮವರೇ ಆದ ಪ್ರಕಾಶ್ ರೈ ಅವರಿಗೆ ಬೆಸ್ಟ್ ನಟ ರಾಷ್ಟ್ರ ಪ್ರಶಸ್ತಿ ಸಿಕ್ಕದೆ... ಆ ಚಿತ್ರದ ಕಥೆ ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರತ್ತೆ.... ಕಥೆ ಹೀಗಿದೆ..... ಕೇಳಿ...... .


ಈ ಚಿತ್ರ ಅಪ್ಪ ಮತ್ತು ಮಗಳ ನಡುವಿನ ಪ್ರೀತಿಯ ಬಗ್ಗೆ ಇದೆ... ಅಪ್ಪ ಕಾಂಜೀವರಂ ರೇಷ್ಮೆ ಸೀರೆಗಳನ್ನು ನೇಯುವ ಬಡ ನೇಕಾರ. ಅವನಿಗೆ ಸ್ವಂತ ಮಗ್ಗವಿಲ್ಲ... ಅಲ್ಲಿ ನೇಕಾರರನ್ನು ದಿನಗೂಲಿಯ ಮೇಲಿಟ್ಟು ಸೀರೆ ನೆಯಿಸಿಕೊಳ್ಳುವ, ಬಹಳ ಕಠಿಣವಾದ ಜಮೀನ್ದಾರಿ ಪದ್ಧತಿ ಇದೆ. ಮಗಳು ದೊಡ್ಡವಳಾದಾಗ ಅವಳ ಮದುವೆಗೆ ಏನೇನು ಕೊಡುತ್ತೇನೋ ಅದನ್ನ ಎಲ್ಲರ ಎದುರಿಗೂ ಹೋಳೋದು ಅಲ್ಲಿನ ರಿವಾಜು.... ಒಂದು ಅರ್ಥದಲ್ಲಿ ಅದು ಆಣೆ ಮಾಡಿದಂತೆ. ಬಡ ಅಪ್ಪನಿಗೆ ಮಗಳ ಮೇಲೆ ತುಂಬಾ ತುಂಬಾ ಪ್ರೀತಿ. ದೊಡ್ಡವಳಾದ ಮಗಳನ್ನು ಕೂಡಿಸಿ ಆರತಿ ಮಾಡುವಾಗ ಈ ಬಡ ಅಪ್ಪ ಎಲ್ಲರ ಎದುರಿಗೆ ' ಮಗಳೇ, ನಿನ್ನ ಮದುವೆಯಲಿ ನಿನಗೆ ಕಾಂಜೀವರಂ ಸೀರೆ ಉಡಿಸಿ ಕಳಿಸುತ್ತೇನೆ' ಎಂದು ಬಿಡುತ್ತಾನೆ... ಇವನ ನೆಂಟರಿಷ್ಟರು ಇವನನ್ನು ತುಂಬ ಬೈಯುತ್ತಾರೆ, ಇಷ್ಟು ಬಡತನದಲ್ಲಿ ರೇಷ್ಮೆ ಸೀರೆ ಕೊಡಿಸುವುದು ಸಾದ್ಯದ ಮಾತಾ ಎಂದು ಇವನನ್ನು ಕೇಳುತ್ತಾರೆ.... ಬಡ ಅಪ್ಪ, ಮಗಳ ಮೇಲಿನ ಪ್ರೀತಿಯಿಂದ ಅದನ್ನ ಮಾಡಿ ತೋರಿಸುವ ಹಠ ತೊಡುತ್ತಾನೆ.... ಅವನಿಗೂ ಗೊತ್ತಿರುತ್ತೆ, ಜೀವಮಾನವಿಡಿ ದುಡಿದರೂ ತನ್ನಿಂದ ಮಗಳಿಗೆ ಕಾಂಜೀವರಂ ರೇಷ್ಮೆ ಸೀರೆ ಕೊಡಿಸೋಕ್ಕೆ ಆಗಲ್ಲ ಅಂತ.....ಆದರೂ ಅವನು ಹಣ ಕೂದಿಡೋಕೆ ಶುರು ಮಾಡುತ್ತಾನೆ. ಅದು ಸಾಕಾಗದೆ ಇದ್ದಾಗ ಕಳ್ಳತನ ಮಾಡಲು ಯೋಚಿಸುತ್ತಾನೆ..... ರಹಸ್ಯವಾಗಿ ಒಬ್ಬ ಕಾರ್ಪೆಂಟರ್ ಹಿಡಿದು ಒಂದು ಕೈಮಗ್ಗ ಮಾಡಿಸಿ ಅದನ್ನ ಯಾರಿಗೂ ತೋರಿಸದೇ ಇರುತ್ತಾನೆ....... ಜಮೀನ್ದಾರನಲ್ಲಿ ಪ್ರತಿದಿನ ಕೆಲಸ ಮಾಡಿ ಬರುವಾಗ ಸ್ವಲ್ಪ ರೇಷ್ಮೆಯನ್ನು ಕದ್ದು ಬಾಯಿಯಲ್ಲಿ ಇಟ್ಟುಕೊಂಡು ಬರುತ್ತಾನೆ...ಆ ಕದ್ದು ತಂದ ನೂಲಿನಿಂದ ಮಗಳಿಗಾಗಿ ಸೀರೆ ನೇಯಲು ಶುರು ಮಾಡುತ್ತಾನೆ... ಊರಲ್ಲಿ ಶುರುವಾದ ಕಾರ್ಮಿಕ ಸಂಘದ ನಾಯಕ ಇವನೇ ಆಗಿ ಧಣಿಗಳ ವಿರುದ್ದ ಹೋರಾಟಕ್ಕೆ ಇಳಿಯುತ್ತಾನೆ... ಈ ಮದ್ಯೆ ಯಾರದೋ ಕೊಲೆ ನಡೆದು ಇವನು ಜೈಲಿಗೆ ಹೋಗುತ್ತಾನೆ... ಅರ್ಧ ನೇಯ್ದ ಸೀರೆ ಹಾಗೆ ಉಳಿಯುತ್ತದೆ... ಮುಂದೆ ಮಗಳು ಕಾಯಿಲೆಗೆ ಬೀಳುತ್ತಾಳೆ, ಅಪ್ಪನಿಗೆ ಜೀವಾವದಿ ಶಿಕ್ಷೆ. ಕೊನೆಗೆ ಅಪ್ಪ ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಗೆ ಬರುವ ಹೊತ್ತಿಗೆ ಮಗಳು ಸತ್ತು ಹೋಗುತ್ತಾಳೆ....ಆದರೆ ಮನೆಯ ಒಳಗೆ ರಹಸ್ಯವಾಗೆ ನೇಯ್ದು ಇಟ್ಟಿದ್ದ ಅರ್ಧ ರೇಷ್ಮೆ ಸೀರೆ ಹಾಗೆ ಇರುತ್ತದೆ.....ಅದನ್ನು ತಂದು ಮಗಳ ಶವದ ಮೇಲೆ ಹೊದೆಸಲು ಪ್ರಯತ್ನ ಮಾಡುತ್ತಾನೆ....ಮುಖ ಮುಚ್ಕಾಲಿಕ್ಕೆ ಹೋದರೆ ಕಾಲಿಗೆ ಸಾಕಾಗ್ತಾ ಇರಲಿಲ್ಲ ....ಕಾಲು ಮುಚ್ಕಾಲಿಕ್ಕೆ ಹೋದರೆ ಶವದ ಮುಖ ತೆರೆದುಕೊಳ್ಳುತ್ತಿತ್ತು....ಮಗಳಿಗೆ ಕಾಂಜೀವರಂ ಸೀರೆ ಉಡಿಸಿ ಕಲಿಸುವ ಅಪ್ಪನ ಕನಸು ಹಾಗೆ ಉಳಿದು ಹೋಗುತ್ತದೆ...


ಅಪ್ಪನ ಪಾತ್ರದಲ್ಲಿ ನಮ್ಮ ಪ್ರಕಾಶ್ ರೈ ಇದ್ದಾರೆ.... ಪ್ರಿಯದರ್ಶನ್ ನಿರ್ದೇಶನ ಇದೆ..... ಇಷ್ಟು ಒಳ್ಳೆ ಕಥೆ ಇರುವ ಸಿನೆಮಾಗಳು ನಮ್ಮ ಊರಲ್ಲಿ ಬರೋದೇ ಇಲ್ಲ... ಬಂದರೂ ನೋಡೋರು ಇರಲ್ಲ.... ನಿಮಗೇನಾದರೂ ನೋಡುವ ಅವಕಾಶ ಸಿಕ್ಕರೆ, ನನಗೆ ದಯವಿಟ್ಟು ತಿಳಿಸಿ...... ಇದೆ ಸಿನೆಮಾದ ಮಾಡಿದ ಪಾತ್ರಕ್ಕಾಗಿ ಪ್ರಕಾಶ್ ರೈ ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.... ಅಭಿನಂದನೆಗಳು ಪ್ರಕಾಶ್.....

Sep 15, 2009

Sep 12, 2009

ಇನ್ನೆಷ್ಟು ಕೆಲಸ ಮಾಡ್ಲಿ........!


ಧಿಕ್ಕಾರ.......ಧಿಕ್ಕಾರ.....

ಚರ್ಚ್ , ಪಬ್ ದಾಳಿಯ ನಂತರ ಈಗ ಮಂಗಳೂರಲ್ಲಿ ಸುದ್ದಿ ಮಾಡ್ತಾ ಇರೋದು , ರಸ್ತೆ ಬದಿಯ ಮರಗಳನ್ನು ಕಡಿಯುವ ಬಗ್ಗೆ.... ಸಾಧಾರಣವಾಗಿ ಮಂಗಳೂರಿನ ಎಲ್ಲ ರಸ್ತೆಗಳು ಸಿಮೆಂಟಿನ ರಸ್ತೆಗಳಾಗುತ್ತಿವೆ.... ನಿಮಗೆ ಗೊತ್ತಿರುವ ಹಾಗೆ ಸಿಮೆಂಟಿನ ರಸ್ತೆಗಳು ವಾತಾವರಣವನ್ನ ತುಂಬಾ ಬಿಸಿಯಾಗಿಸುತ್ತವೆ..... ನಮ್ಮ ಹಿರಿಯರು ನಮ್ಮ ಹಿತಕ್ಕಾಗಿ , ನಮ್ಮ ಒಳಿತಿಗಾಗಿ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟಿದ್ದರು. ಅವು ಈಗ ಮರಗಳಾಗಿವೆ... ತಂಪನ್ನು ನೀಡುತ್ತಿವೆ... ಮಂಗಳೂರಿನ ನಗರದ ರಸ್ತೆಗಳ ಎರಡು ಬದಿಗಳಲ್ಲಿ ವೆಹಿಕಲ್ ಪಾರ್ಕ್ ಮಾಡಲು ಕೊಟ್ಟು ಹಣ ವಸೂಲಿ ಮಾಡುತ್ತಾರೆ....ಹೀಗೆ ರಸ್ತೆ ಬದಿಗಳಲ್ಲಿ ವೆಹಿಕಲ್ ಪಾರ್ಕ್ ಮಾಡಲು ಬಿಡುವುದೇ ಆದರೆ, ಅದೇ ಬದಿಗಳಲ್ಲಿ ತಮ್ಮ ಪಾಡಿಗೆ ತಾವಿರುವ ಮರಗಳನ್ನು ಕಡಿಯುವ ಯೋಚನೆಯಾದರು ಯಾಕೆ ಅಂತ.....ನಮಗೆ ನೆರಳು, ತಂಪನ್ನು ಕೊಡುವ ಮರಗಳನ್ನು ಕತ್ತರಿಸುವ ನಿರ್ಧಾರಕ್ಕೆ ಬರುತ್ತಾರೆ ಅಂದರೆ ಅವರನ್ನು ದೇವರೇ ಕಾಪಾಡಲಿ..... ಅಕಸ್ಮಾತ್ ಮರಗಳು ರಸ್ತೆ ಮಧ್ಯದಲ್ಲಿದ್ದರೆ ಕಡಿಯಲಿ ಆದರೆ ರಸ್ತೆಯ ಬದಿಯಲ್ಲಿದ್ದು , ರಸ್ತೆಯ ಅಂದ , ಜನರ ಆರೋಗ್ಯ ಹೆಚ್ಚಿಸುವ ಮರಗಳನ್ನು ಕದಿಯುತ್ತಾರೆ ಎಂದರೆ ಅವರಿಗೊಂದು ಧಿಕ್ಕಾರವಿರಲಿ.... ಮೊನ್ನೆ 'ವಿಜಯ ಕರ್ನಾಟಕ'ದಲ್ಲಿ ಒಂದು ಧುಕ್ಖದ ಸುದ್ದಿ ಓದಿದೆ..., ಯಾರೋ ಪುಣ್ಯಾತ್ಮರು ಈ ಸಮಸ್ಯೆಯನ್ನು ನಿವಾರಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ... ಅದೇನೆಂದರೆ ಮರಕ್ಕೆ ಚಿಕ್ಕಚಿಕ್ಕ ಹೋಲ್ ಮಾಡಿ ಅದರಲ್ಲಿ ಇಂಗನ್ನು ತುಂಬಿಸಿದ್ದಾರೆ.... ಹೀಗೆ ಮಾಡಿದರೆ ಮರ ಕ್ರಮೇಣ ಒಣಗಿ ಸತ್ತು ಹೋಗುತ್ತವೆ..... ಎಂತಾ ಕೆಟ್ಟ ಜನರಲ್ಲವೆ....ಒಂದು ಗಿಡ ಮರವಾಗಲು ಹದಿನೈದು ವರ್ಷವಾದರೂ ಬೇಕು...ಅಧಿಕಾರದಲ್ಲಿರುವ ಜನ ಈ ರೀತಿ ಮರಗಳನ್ನು ಹೋದರೆ, ತಮ್ಮ ಮುಂದಿನ ಸಂತತಿಗಳಿಗೆ ಆಮ್ಲಜನಕವನ್ನು ಅಮೆರಿಕದಿಂದಲೇ ಆಮದು ಮಾಡಿಕೊಳ್ಳುತ್ತಾರೋ ನೋಡಬೇಕು....ಮರಗಳನ್ನು ಹೀಗೆ ಸಾಯಿಸಿರುವ ಕೆಲಸ ಮಾಡಿದ ಪಾಪಿಗಳಿಗೆ ದೇವರು ನೂರು ಗಿಡಗಳನ್ನು ನೆಡುವ ಬುದ್ದಿ ಕೊಡಲಿ ಎಂದು ಹಾರೈಸುತ್ತೇನೆ......

Sep 10, 2009

ಇನ್ನೊಮ್ಮೆ ಬಾ......!

'ಸಾರೆ ಜಹಾಂಸೇ ಅಚ್ಚಾ........' ನನ್ನ ಕಾರ್ ಹಿಂದಕ್ಕೆ ಬರ್ತಾ ಇತ್ತು... ಮನೆಗೆ ಹೋಗಲು ಕಾರನ್ನು ಹಿಂದಕ್ಕೆ ತೆಗಿತಾ ಇದ್ದೆ, ತುಂಬಾ ಮಳೆ ಬರ್ತಾ ಇತ್ತು.... ಗೊತ್ತಲ್ಲ, ಕರಾವಳಿಯ ಮಳೆ ಹೇಗಿರತ್ತೆ ಅಂತ....ಕಾರ್ ಹಿಂದೆ ನಿಂತು ಆಟೋಗೆ ಕಾಯುತ್ತಿದ್ದ ಹುಡುಗಿಗೆ ಡಿಕ್ಕಿ ಹೊಡೆದಾಗಲೇ ನನ್ನ ಕಾರಿನ 'ಸಾರೆ ಜಹಾಂಸೇ ಅಚ್ಚಾ' ಮ್ಯೂಸಿಕ್ ನಿಂತದ್ದು....ತಕ್ಷಣ ಕೆಳಗಿಳಿದು ನೋಡಿದರೆ.....ದಿನಾಲೂ ಬೆಳಿಗ್ಗೆ ನಾನು ಕಾರ್ ಪಾರ್ಕ್ ಮಾಡುವಾಗ 'ಗುಡ್ ಮಾರ್ನಿಂಗ್ ಸರ್' ಎನ್ನುತ್ತಾ ಅವಳಷ್ಟೇ ಮುದ್ದಾದ ಸ್ಕೂಟಿ ಪಾರ್ಕ್ ಮಾಡುತ್ತಾ ಸ್ವೀಟ್ smile ಎಸೆಯುತ್ತಿದ್ದ ಹುಡುಗಿ......! 'ಸಾರೀ ಕಣ್ರೀ, ನಂಗೆ ಕಾಣಿಸಲೇ ಇಲ್ಲ, ಏನಾದ್ರೂ ಪೆಟ್ಟು ಬಿತ್ತಾ ' ಎಂದೆ . ...'ಏನೂ ಇಲ್ಲ ಸರ್, ನನ್ನ ಸ್ಕೂಟಿ ಕೈಕೊಟ್ಟಿದೆ, ಅದ್ಕೆ ಆಟೋಗಾಗಿ ಕಾಯ್ತಾ ಇದ್ದೆ...' ಅಂದಳು ಹುಡುಗಿ....ಆಗ ನಾನು 'ಹೆದರಬೇಡಿ, ನಾನು ನಿಮ್ಮನ್ನು ಮನೆಗೆ ಡ್ರಾಪ್ ಮಾಡಿ ಹೋಗುತ್ತೇನೆ' ಎಂದೇ.... ಹುಡುಗಿ, 'ಥಾಂಕ್ ಯು ಸರ್' ಎನ್ನುತ್ತಾ ನನ್ನ ಪಕ್ಕದ ಸೀಟಿನಲ್ಲಿಯೇ ಕುಳಿತಳು.ನನ್ನ ಮನಸ್ಸು ಆಗಲೇ ದೂದ್ ಪೇಡಾ ತಿನ್ನೋಕೆ ಶುರು ಮಾಡಿತ್ತು..... ಯಾವಾಗಲು ಏನೂ ಮಾತಾದದಿದ್ದ ಹುಡುಗಿ ಇವತ್ತು ವಟ....ವಟ....ಮಾತಾಡುತ್ತಿತ್ತು. ಅವಳ ಊರು, ಅವಳ ಕೆಲಸ ಅದು...ಇದು...ಅಂತ ಮಾತಾಡುತ್ತಲೇ ನನ್ನೆಡೆಗೆ, ಸ್ಮೈಲ್ ಸ್ಮೈಲ್ ಕೊಡುತ್ತಿದ್ದಳು.... ನಾನಂತೂ ಫುಲ್ ಖುಷ್... ಆಕಸ್ಮಿಕವಾಗಿ ಸಿಕ್ಕ ಈ ಕಂಪನಿಗೆ ನಾನು ಖುಷಿಯಾಗಿದ್ದೆ. ಹೊರಗಡೆ ಜೋರಾಗಿ ಮಳೆಯಾಗುತ್ತಿದ್ದರೆ, ನನ್ನ ಮೈ ಬಿಸಿಯಾಗುತ್ತಿತ್ತು....ಅಷ್ಟರಲ್ಲಿ ಅವಳ ಮನೆ ಬಂತು... 'please ಸರ್,ನನ್ನ ಮನೆಯಲ್ಲಿ ಒಂದು ಕಪ್ ಕಾಫಿ ಕೊಡಿದು ಹೋಗಿ ಸರ್' ಎಂದಿತು ಹುಡುಗಿ.....ನಾನುe ಆಗಲೇ ' ಬೇಡ ....ಬೇಡ.....ಇನ್ಯಾವತ್ತಾದರೂ ......' ಎನ್ನುತ್ತಲೇ ಅವಳ ಮನೆ ಬಾಗಿಲಲ್ಲಿ ನಿಂತಿದ್ದೆ .....ಅವಳು ಕೀನಿಂದ ಬಾಗಿಲು ತೆಗೆದಾಗಲೇ ಗೊತ್ತಾಗಿದ್ದು, ಅವಳ ಮನೆಯಲ್ಲಿ ಬೇರೆ ಯಾರೂ ಇಲ್ಲ ಎಂದು....ನನ್ನ ಬಾಯಿ ಮಾತ್ರ..' ನೀವು ಒಬ್ಬರೇ ಇದ್ದಿರಾಂತ ಕಾಣ್ಸತ್ತೆ, ನಾನು ಇನ್ಯಾವತ್ತಾದರು ಬರ್ತೇನೆ' ಅನ್ನುತ್ತಿತ್ತದರೂ ....ಕಳ್ಳ ಮನಸ್ಸು ಮಾತ್ರ ಡಾನ್ಸ್ ಮಾಡುತ್ತಿತ್ತು......ಒಳಗೆ ಹೋಗಿ ಸೋಫಾ ಮೇಲೆ ಕುಳಿತೆ.... 'ಸರ್, ಟವೆಲ್ ಏನಾದರು ಕೊಡ್ಲಾ, ನಿಮ್ಮ ತಲೆ ಒದ್ದೆಯಾಗಿದೆ ಅಂದಳು...'ಏನೂ ಬೇಡ, ನಾನು ಮನೆಗೆ ಹೋಗಬೇಕು' ಎಂದೇ. 'ಇಲ್ಲ ಸರ್, ನೀವು ಇಲ್ಲೇ ಊಟ ಮಾಡಿ ಹೋಗಬೇಕು. ನಾನು ಡ್ರೆಸ್ ಚೇಂಜ್ ಮಾಡಿಕೊಂಡು ಬರುತ್ತೇನೆ, ' ಎಂದು ಒಳಗೆ ಹೋದಳು. ನನ್ನ ಮನಸ್ಸು ಆಗಲೇ "ಹಂ ತುಂ ಏಕ್ ಕಮರೆಮೆ ಬಂದ್ ಹೋ" ಎಂದು ಹಾಡಲು ಶುರು ಮಾಡಿತ್ತು ..... ಡ್ರೆಸ್ ಚೇಂಜ್ ಮಾಡಿ ಬಂದ ಹುಡುಗಿ ಜೂಹಿ ಚಾವ್ಲ ಹಾಗೆ ಮುದ್ದಾಗಿ ಕಾಣುತ್ತಿದ್ದಳು...ಒಂದು ಕೈಯಲ್ಲಿ ಕಾಫಿ ಇನ್ನೊಂದು ಕೈಯಲ್ಲಿ ಟವೆಲ್ ಇತ್ತು..... ಅವಳ ಬಿಸಿ ಉಸಿರು ನನ್ನ ಮುಖಕ್ಕೆ ತಾಕುತ್ತಿತ್ತು....ಒದ್ದೆ ತಲೆಯಲ್ಲಿ ಬಿಸಿ ಬಿಸಿ ಯೋಚನೆ......ತಲೆ ಒರೆಸಿಕೊಂಡು ಟವೆಲ್ ವಾಪಸ್ ಕೊಟ್ಟೆ....ಇನ್ನೊಂದು ಕೈಯಿಂದ ಕಾಫಿ ತೆಗೆದುಕೊಳ್ಳುವಾಗ ಅವಳ ಕೈ ನನ್ನ ಕೈಯಲ್ಲಿತ್ತು..... ಅವಳು ಹತ್ತಿರ ಬಂದಳು..... ಕೈಯಲ್ಲಿ ಕಾಫಿ.....ಮನಸಲ್ಲಿ ದೂದ್ ಪೇಡ.... ಅವಳ ಮುಖ ,ನನ್ನ ಮುಖದ ಎದುರು..........ನಾನು ಹತ್ತಿರ ಹೋದೆ....... ಅವಳೂ ಹತ್ತಿರ ಬಂದಳು ........ಕೈಯಲ್ಲಿದ್ದ ಬಿಸಿ ಬಿಸಿ ಕಾಫಿ ನನ್ನ ಮೈ ಮೇಲೆ............. 'ಅಯ್ಯೋ ಅಮ್ಮಾ' ಅಂದು ಕಿರುಚಿದೆ........... 'ಏನಾಯ್ತುರೀ ...... ರೀ... ಏನಾಯ್ತು...'... ಕಣ್ ಬಿಟ್ಟೆ..... .......ನನ್ನ ಹೆಂಡತಿ ಎಬ್ಬಿಸಿ ಕೇಳ್ತಾ ಇದ್ದಳು.....'ಏನಾಯ್ತು, ಯಾಕೆ ಕೂಗ್ತಾ ಇದ್ದೀರಾ...' 'ಏನಿಲ್ಲಾ ಕನಸು ಅಷ್ಟೆ' ಮಗ್ಗಲು ಬದಲಿಸಿ ಮಲಗಿದೆ, ಕನಸಾದರೂ ಮುಂದುವರಿಯಲಿ ಎಂದು...........

Sep 9, 2009

ಕೇಳಿದ ಮಾತುಗಳು


ನಾನೆಷ್ಟು ಒಬ್ಬಂಟಿ ಎಂದುಕೊಳ್ಳುತ್ತೇನೋ,

ಜಗತ್ತು ನನ್ನನ್ನು ಅಷ್ಟೇ ಒಬ್ಬಂಟಿಯಾಗಿ ಮಾಡುತ್ತದೆ.

ನನಗೆ ಎಷ್ಟು ಗೌರವ ಸಿಗಬೇಕೋ,

ಅದನ್ನು ಪಡೆಯಲು ನಾನು ಯಾರನ್ನೂ ಬೇಡಬೇಕಾಗಿಲ್ಲ.

ದೇಹಕ್ಕೆ ಆದ ಗಾಯಕ್ಕಿಂತಲೂ,

ಹೃದಯಕ್ಕಾದ ಗಾಯ ತುಂಬಾ ನೋಯಿಸುತ್ತದೆ.

ನಾನು ಎಷ್ಟು ಹೆಚ್ಚು ಹೆಚ್ಚು ನಗುತ್ತೇನೋ,

ನನ್ನ ನೋವು ಅಷ್ಟು ಆಳ ಇದೆ.

ನಾನು ಎಷ್ಟೇ ಪ್ರಾರ್ಥಿಸಿದರು ಸಹ,

ನನಗೆ ಏನು ಸಿಗಬೇಕೋ ಅದೇ ಸಿಗುತ್ತದೆ.

ನಮ್ಮ ಎಲ್ಲಾ ಸುಳ್ಳು ಸಂಬಂಧಗಳಿಗೂ,

ಕೊನೆ ಇದೆ ಮತ್ತೆ ಅದು ಹಳಸುತ್ತದೆ ಕೂಡ.

ಕೆಲವೊಮ್ಮೆ ನಮ್ಮ ಕಣ್ಣೀರು,

ಮಾತಿಗಿಂತಲೂ ಹರಿತವಾಗಿರುತ್ತದೆ.

- ಎಲ್ಲೋ ಕೇಳಿದ್ದರ ಭಾವಾನುವಾದ.

Sep 7, 2009

ಹೃದಯ....



ಹೃದಯವೆಂಬ ಜಾಗದಲ್ಲಿ.......!



ಯೋಚನೆಗಳು ಬದಲಾಗಿ,


ಆಸೆಗಳಾಗುತ್ತವೆ.....



ಆಸೆಗಳು ಬದಲಾಗಿ,


ಕನಸುಗಳಾಗುತ್ತವೆ....



ನಮ್ಮನ್ನು ನಾವು,


ನಂಬಿದರೆ ಮಾತ್ರ ಎಲ್ಲವು,


ನನಸಾಗುತ್ತವೆ......


Sep 6, 2009

ನನ್ನನ್ ನಂಬಿ.... ಇದ್ ನಿಜ....!


ಮನಸು...


ಕನಸು..


ಕಠಿಣ.



ಬದುಕು...


ಜೀವನ..


ವಿಚಿತ್ರ .



ಪ್ರೀತಿ...


ಪ್ರೇಮ..


ಭ್ರಮೆ.



ಮೋಸ...


ಮೋಜು..


ವಾಸ್ತವ.

ಈಗ ಅವಳಿಲ್ಲ.....



ಈಗ ಅವಳಿಲ್ಲ,


ಅವಳ ಮಾತಿಲ್ಲ,


ಮಾತಲ್ಲಿ ಮೋಹವಿಲ್ಲ,


ಮೋಹದ ಮೋಸವಿಲ್ಲ,


ಮೋಸದ ಮನಸಿಲ್ಲ,


ಮನಸಲ್ಲಿ ನಾನಿಲ್ಲ,


ನನ್ನಲ್ಲಿ ನೋವಿಲ್ಲ,


ನೋವಿಗೆ ಅವಳೇ ಇಲ್ಲ......!